ನಿರಾಶೆಯನ್ನು ತಪ್ಪಿಸಲು ಯಾರಿಂದಲೂ ಏನನ್ನೂ ನಿರೀಕ್ಷಿಸದಿರುವುದು ಒಂದು ಉತ್ತಮ ಮಾರ್ಗ!

ನಿರಾಶೆಯನ್ನು ತಪ್ಪಿಸಲು ಯಾರಿಂದಲೂ ಏನನ್ನೂ ನಿರೀಕ್ಷಿಸದಿರುವುದು ಒಂದು ಉತ್ತಮ ಮಾರ್ಗ! ಮನಸು ಸಂತೋಷವಾಗಿರಲು ಏನು ಮಾಡಬೇಕು ? ಸರ್ವ ಸುಖ ಸಂಪತ್ತು ಆಯುರಾರೋಗ್ಯ, ಶಾಂತಿ, ನೆಮ್ಮದಿ ಎಲ್ಲವೂ ಸಮ್ಮಿಳಿತವಾಗಿರಬೇಕು ಅಲ್ವೇ ? ಆದರೆ ಇವೆಲ್ಲವನ್ನೂ ಪಡೆಯಲು ನಮ್ಮ ಪ್ರಯತ್ನ ಕೂಡ ಮುಖ್ಯ . ಜೊತೆಗೆ ಅದೃಷ್ಟ . ಆದ್ರೂ ಎಲ್ಲ ಇದ್ದು ಅನೇಕ ಬರಿ ಮನಶಾಂತಿ ಇರಲ್ಲ ಯಾಕೆ? ಮನುಷ್ಯ ಸಂಘಜೀವಿ. ಪರಸ್ಪರ ಹೊಂದಾಣಿಕೆ ತುಂಬಾ ಮುಖ್ಯ. ಆದರೆ ಕೆಲವೊಮ್ಮೆ ಈ ಹೊಂದಾಣಿಕೆಯಾ ಜೀವನ ತುಂಬಾ ಕಷ್ಟ ಅನಿಸುತ್ತೆ. ಪ್ರತಿನಿತ್ಯವೂ ಅಸಮಾಧಾನ , ಅನಪೇಕ್ಷಿತ ಜಗಳ, ಅಶಾಂತಿ , ದುಃಖ್ಖ ಎಲ್ಲವೂ ನಮ್ಮನ್ನು ಬೆಂಬಿಡದೆ ಕಾಡುತ್ತೆ ! ಬದುಕು ತುಂಬಾ ಕಷ್ಟ ಅನಿಸುತ್ತೆ . ಯಾಕೀಗೆ ? ಉತ್ತರ ಹುಡುಕುತ್ತ ಹೊರಟಾಗ ನಮಗೆ ಕಂಡು ಬರುತ್ತೆ ಅನೇಕ ಮಿತಿಗಳು. ಅದರಲ್ಲಿ ಪ್ರಮುಖವಾದದ್ದು ನಮ್ಮ ಅತಿಯಾದ ನಿರೀಕ್ಷೆ !

Originally published in kn
Reactions 0
338
PAKASH DSOUZA
PAKASH DSOUZA 24 Jan, 2021 | 3 mins read

ರಾಶೆಯನ್ನು ತಪ್ಪಿಸಲು ಯಾರಿಂದಲೂ ಏನನ್ನೂ ನಿರೀಕ್ಷಿಸದಿರುವುದು ಒಂದು ಉತ್ತಮ ಮಾರ್ಗ!

ಮನಸು ಸಂತೋಷವಾಗಿರಲು ಏನು ಮಾಡಬೇಕು ? ಸರ್ವ ಸುಖ ಸಂಪತ್ತು ಆಯುರಾರೋಗ್ಯ, ಶಾಂತಿ,  ನೆಮ್ಮದಿ ಎಲ್ಲವೂ ಸಮ್ಮಿಳಿತವಾಗಿರಬೇಕು ಅಲ್ವೇ ? ಆದರೆ ಇವೆಲ್ಲವನ್ನೂ ಪಡೆಯಲು ನಮ್ಮ ಪ್ರಯತ್ನ ಕೂಡ ಮುಖ್ಯ . ಜೊತೆಗೆ ಅದೃಷ್ಟ . ಆದ್ರೂ ಎಲ್ಲ ಇದ್ದು ಅನೇಕ ಬರಿ ಮನಶಾಂತಿ ಇರಲ್ಲ ಯಾಕೆ?  ಮನುಷ್ಯ ಸಂಘಜೀವಿ. ಪರಸ್ಪರ ಹೊಂದಾಣಿಕೆ ತುಂಬಾ ಮುಖ್ಯ. ಆದರೆ ಕೆಲವೊಮ್ಮೆ ಈ ಹೊಂದಾಣಿಕೆಯಾ ಜೀವನ ತುಂಬಾ ಕಷ್ಟ ಅನಿಸುತ್ತೆ. ಪ್ರತಿನಿತ್ಯವೂ ಅಸಮಾಧಾನ , ಅನಪೇಕ್ಷಿತ  ಜಗಳ, ಅಶಾಂತಿ , ದುಃಖ್ಖ ಎಲ್ಲವೂ ನಮ್ಮನ್ನು ಬೆಂಬಿಡದೆ ಕಾಡುತ್ತೆ ! ಬದುಕು ತುಂಬಾ ಕಷ್ಟ ಅನಿಸುತ್ತೆ . ಯಾಕೀಗೆ ? ಉತ್ತರ ಹುಡುಕುತ್ತ ಹೊರಟಾಗ ನಮಗೆ ಕಂಡು ಬರುತ್ತೆ  ಅನೇಕ ಮಿತಿಗಳು. ಅದರಲ್ಲಿ ಪ್ರಮುಖವಾದದ್ದು ನಮ್ಮ ಅತಿಯಾದ ನಿರೀಕ್ಷೆ !

ನಿರೀಕ್ಷೆ ನಮ್ಮಲಿ ನಿರಾಶೆಯನ್ನುಂಟುಮಾಡಿದರೆ ಪ್ರೀತಿ ಭರವಸೆಯನ್ನು ಮೂಡಿಸುತ್ತೆ!

ಹೌದು ಗೆಳೆಯರೇ ಪತಿ ಪತ್ನಿಯ ನಡುವೆ ,ಅಪ್ಪ-ಅಮ್ಮ ಮತ್ತು ಮಕ್ಕಳ ನಡುವೆ , ಸಂಬಧಿಕರ ನಡುವೆ , ಗೆಳೆಯರ ನಡುವೆ, ಸಹೋದ್ಯೋಗಿಗಳ ನಡುವೆ , ಕಡೆಗೆ ಅಪರಿಚಿತರ ಬಗ್ಗೆ ಕೂಡ ನಮ್ಮ ಅತಿಯಾದ ನಿರೀಕ್ಷೆಯೇ ಕೆಲವೊಮ್ಮೆ ನಮ್ಮ ಸಂತೋಷವನ್ನು ಕಸಿದುಕೊಳ್ಳುತ್ತಿರುವುದು ಕಂಡುಬರುತ್ತದೆ. ಆದರೆ ಆ ನಿರೀಕ್ಷೆಯನ್ನೇ ನಾವು ಇಟ್ಟುಕೊಳ್ಳದಿದ್ದರೆ ! ಜೀವನ ಸಲ್ಪ ಕಷ್ಟ ಆಗಬಹುದು ಆದರೆ ನಮ್ಮ ನೆಮ್ಮದಿಯನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ.

ಹಾಗಾದ್ರೆ ನಿರೀಕ್ಷೆ ಇಟ್ಟುಕೊಳ್ಳುವುದೇ ತಪ್ಪೇ ? ಸಂಬಂಧಗಳಿಗೆ ಬೆಲೆ ಇಲ್ಲವೇ ಎನ್ನುವ ಪ್ರಶ್ನೆ ನಮಗೆ ಕಾಡಬಹುದು. ಇಲ್ಲ ಗೆಳೆಯರೇ ನಿರೀಕ್ಷೆ ಇಟ್ಟುಕೊಳ್ಳುವುದು ಖಂಡಿತ ತಪ್ಪಲ್ಲ . ಅಪ್ಪ  ಮತ್ತು ಅಮ್ಮ , ತಮ್ಮ ಮಗ ಚೆನ್ನಾಗಿ ಓದಬೇಕು ಎನ್ನುವ ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ ಕೂಡ. ಆದರೆ ನಾಣ್ಯಕ್ಕೆಎರಡು ಮುಖ ಇದ್ದಂತೆ ನಿರೀಕ್ಷೆಗಳಿಗೂ ಕೂಡ ಎರಡು ಮುಖ ಇರುತ್ತೆ . ಸೂಕ್ಷ್ಮವಾಗಿ ಗಮನಿಸಿದಾಗ ಕೆಲವು ನಿರೀಕ್ಷೆಗಳು ಇಲ್ಲದಿದ್ದರೇನೇ ಚೆಂದ ಎನ್ನುವುದು ಸುಳ್ಳಲ್ಲ. ಸಂಬಧಗಳ ಉಳಿಯುವಿಕೆಗೆ ನಮ್ಮ ನಿರೀಕ್ಷೆಗಳನ್ನು ಕಡಿಮೆ ಮಾಡಬೇಕಾಗುತ್ತದೆ. ಗಂಡ -ಹೆಂಡತಿಯ ಸಂಬಂಧವನ್ನೇ ತೆಗೆದುಕೊಳ್ಳಿ. ಪರಸ್ಪರ ಅತಿಯಾದ ನಿರೀಕ್ಷೆಗಳು ಸಹಜ . ಆದರೂ ಕೆಲವೊಮ್ಮೆ ಕೆಲವು ನಿರೀಕ್ಷೆಗಳನ್ನು ಮರೆತು ಬಿಟ್ಟರೆ ಸಂಸಾರದ ರಥ ಸುಲಭವಾಗಿ ಸಾಗುತ್ತೆ. ಉದಾಹರಣೆಗೆ ಸಣ್ಣ ಪುಟ್ಟ ಕೆಲಸ ಕಾರ್ಯಗಳು. ಅಡುಗೆ ಮನೆಯ ತೊಟ್ಟಿಯಲ್ಲಿ ಪಾತ್ರೆಗಳ ರಾಶಿ ಬಿದ್ದಿದೆ.  ಪತ್ನಿ ಮಕ್ಕಳಿಗೆ ಪಾಠ ಹೇಳಿಕೊಡುತಿದ್ದಾಳೆ. ಪಾತ್ರೆಯ ರಾಶಿ ಕಂಡ ಪತಿ , ಆಮೇಲೆ ಪತ್ನಿ ಬಂದು ತೊಳೆಯುತ್ತಾಳೆ ಎಂದು ಹಾಗೆ ಅಲ್ಲೇ ಬಿಟ್ಟು ಬರುತ್ತಾನೆ. ಇಲ್ಲಿ ಅವನ ನಿರೀಕ್ಷೆ ಇಲ್ಲವೇ ಅಪೇಕ್ಷೆ ಏನೆಂದ್ರೆ ಹೆಂಡತಿ ಹೇಗೋ ದಿನ ಪತ್ರೆ ತೊಳೆಯುತ್ತಾಳೆ. ಇಂದು ಅವಳೇ ತೊಳೆಯಲಿ ಎಂದು! ಅವಳು ಮನಸಿನಲ್ಲಿ ಯೋಚಿಸುತ್ತಾಳೆ, ಪತಿ ಅಡುಗೆ ಮನೆಗೆ ಹೋಗಿದ್ದಾನೆ. ಪತ್ರೆ ಖಂಡಿತವಾಗಿಯೂ ಕಣ್ಣಿಗೆ ಬಿದ್ದಿರುತ್ತೆ. ಪತಿ ಅದನ್ನು ತೊಳೆದರೆ ನನಗೆ ಸಲ್ಪ ಸುಲಭವಾಗುತಿತ್ತು. ಇದು ಅವಳ ನಿರೀಕ್ಷೆ ಇಲ್ಲವೇ ಅಪೇಕ್ಷೆ. ಇಲ್ಲಿ ಇಬ್ಬರು ಕೂಡ ಅವರವರ ಯೋಚನೆಯಲ್ಲಿ ಸರಿಯಾಗಿಯೇ ಇದ್ದಾರೆ . ಪತ್ನಿ ಯಾವಾಗಲು ಪಾತ್ರೆ ತೊಳೆಯುತ್ತಾಳೆ  ಹಾಗೆ ಇವತ್ತು ಕೂಡ ಎಂದು ಅವನ ನಂಬಿಕೆ ಯಾಗಿದ್ದರೆ , ಇವತ್ತು ನಾನು ಮಕ್ಕಳಿಗೆ ಪಾಠ ಹೇಳಿಕೊಡೋದ್ರಲ್ಲಿ ವ್ಯಸ್ತಳಾಗಿದ್ದೇನೆ, ನನ್ನ ಗಂಡ ಪತ್ರೆ ತೊಳೆಯಲಿ ಎನ್ನುವುದು ಅವಳ ನಿರೀಕ್ಷೆ. ಇವಾಗ ನಿರೀಕ್ಷೆಯನ್ನು ಬಿಟ್ಟಾಕಿ ಯೋಚನೆ ಮಾಡಿದ್ರೆ ಪತಿ ಅಡುಗೆ ಮನೆಗೆ ಬಂದಿದ್ದಾನೆ. ಪಾತ್ರೆಗಳ ರಾಶಿ ಬಿದ್ದಿದೆ. ಪತ್ನಿ ಯಾವಾಗಲು ಪಾತ್ರೆ ತೊಳೆಯುತ್ತಾಳೆ ನಿಜ ಆದ್ರೆ ಇವತ್ತು ಕೂಡ ಅವಳೇ ಪಾತ್ರೆ ತೊಳೆಯಲಿ ಎಂದು ನಿರೀಕ್ಷಿಸದೆ ಅವನೇ ತೊಳೆದಿದ್ದರೆ ಏನಾಗುತ್ತಿತ್ತು?  ಹೆಂಡತಿ ತನ್ನನ್ನು ಅರ್ಥಮಾಡಿಕೊಂಡು ಸಹಾಯ ಮಾಡಿದ ಪತಿಯ ಬಗ್ಗೆ ಹೆಮ್ಮೆ ಪಡುತ್ತಿದ್ಲು. ಅವಳಿಗೆ ತುಂಬಾ ಸಂತೋಷವಾಗುತ್ತಿತ್ತು. ಹಾಗೆ ಪತ್ನಿ ,ತನ್ನ ಗಂಡ ಪಾತ್ರೆ ತೊಳೆಯಲಿ ಎಂದು ನಿರೀಕ್ಷೆಯನಿಟ್ಟುಕೊಳ್ಳದೆ,  ಮಕ್ಕಳಿಗೆ ಪಾಠ ಹೇಳಿಕೊಟ್ಟ ಮೇಲೆ ತಾನೇ ಪಾತ್ರೆ  ತೊಳೆದಿದ್ದರೆ ಕೂಡ ಇಲ್ಲಿ ಅಸಮಾಧಾನ ಮೂಡುತ್ತಿರಲಿಲ್ಲ. ಅವಳು ನಿರೀಕ್ಷೆಯನ್ನೇ ಇಟ್ಟುಕೊಂಡಿಲ್ಲವಾದುದರಿಂದ ಅವಳಿಗೆ ಬೇಸರವಾಗುತ್ತಿರಲಿಲ್ಲ. ಆದರೆ ಅದೇ ನಿರೀಕ್ಷೆಯನ್ನಿಟ್ಟುಕೊಂಡಿದ್ದು ಪತಿ ಸಹಾಯ ಮಾಡದೇ ಇರ್ರುತಿದ್ದ್ರೆ ಅವತ್ತು ಜಗಳ ಖಂಡಿತ ಅಲ್ವೇ. ಹಾಗಂತ ಸಂಬಂಧಗಳಲ್ಲಿ ನೀರಿಕ್ಷೆಯನ್ನೇ ಇಟ್ಟುಕೊಳ್ಳಬಾರದು ಎಂದ್ರು ತಪ್ಪಾಗುತ್ತೆ. ಪ್ರೀತಿಯಲ್ಲಿ ನೀರಿಕ್ಷೆಗಳು ಸಹಜ. ಆದರೆ ಸಂಬಂಧಗಳು ಹದಗೆಡಲಾರಂಭಿಸಿದಾಗ ನೀರಿಕ್ಷೆಗಳನ್ನು ತ್ಯಾಗ ಮಾಡಬೇಕಾದ ಅಗತ್ಯ ಕಂಡು ಬರುತ್ತದೆ.! ಕುಸಿಯುತ್ತಿರುವ ಸಂಬಂಧಗಳ ಸೇತುವೆಯನ್ನು ಮುರಿದು ಬೀಳದಂತೆ ತಡೆಹಿಡಿದು ಮತ್ತೊಮ್ಮೆ ಗಟ್ಟಿಗೊಳಿಸಲು ಇಂತಹ ತ್ಯಾಗದ ಅಗತ್ಯ ಇದೆ.

ನೀರಿಕ್ಷೆಗಳ ತ್ಯಾಗ ಹೊಂದಾಣಿಕಾ ಜೀವನದ ಸೂತ್ರ

ನೀರಿಕ್ಷೆಗಳ ತ್ಯಾಗ ಮನದಲ್ಲಿ ಬೇಸರ ಮೂಡುವುದನ್ನು ತಪ್ಪಿಸುತ್ತೆ. ಕೆಲವೊಮ್ಮೆ ನಮ್ಮ ಒಳ್ಳೆತನವನ್ನು ಇತರರು ದುರುಪೋಯೋಗ ಮಾಡಿಕೊಳ್ಳುತರಾದ್ರು ಕೂಡಿ ಬಾಳಲೇ ಬೇಕಾದ ಸಂದರ್ಭದಲ್ಲಿ ಈ ಎಲ್ಲ ಅಂಶಗಳು ನಗಣ್ಯ . ಉದಾಹರಣೆ ಕೊಡೋದಾದ್ರೆ ಪತಿ ಮತ್ತು ಪತಿಯ ತಂಗಿ ಅತ್ತೆ ಮಾವ ಇರುವ ಕುಟುಂಬದಲ್ಲಿ ಸೊಸೆ ಐದನೆಯವಳಾಗಿ ಕಾಲಿಡುತ್ತಾಳೆ. ಪತಿಯ ಮನೆ ತವರು  ಮನೆಯ ತದ್ವಿರುದ್ದ. ಸ್ವಚ್ಛತೆಗೆ ಮಹತ್ವ ಕೊಡುವ ಪರಿಸರದಲ್ಲಿ ಬೆಳೆದ ಹುಡುಗಿಗೆ ಗಂಡನ ಮನೆಯ ಅವ್ಯವಸ್ಥೆ ತುಂಬಾನೇ ಕಿರಿಕಿರಿ. ಬಂದ ಮರು ದಿನದಿಂದಲೇ ಮನೆಯನ್ನು ಚೊಕ್ಕಟ್ಟವಾಗಿರಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ ಹಾಗು ಉಳಿದವರಿಂದಲೂ ಸಹಕಾರ ನಿರೀಕ್ಷಿಸುತ್ತಾಳೆ. ಆದರೆ ಅವಳು ಬಯಸಿದ ಸಹಕಾರ ಸಿಗದಿದ್ದಾಗ ಗಂಡನ ಜೊತೆ ಜಗಳವಾಡುತ್ತಾಳೆ. ಮನಸು ಕೆಡುತ್ತದೆ. ತನ್ನ ತಾಯಿಯ ಬಳಿ ದುಃಖ್ಖ ಹೇಳಿಕೊಂಡಾಗ ಅವರು ಹೇಳುತ್ತಾರೆ , ಮಗಳೇ ಒಂದೇ ದಿನದಲ್ಲಿ ಬದಲಾವಣೆ ನಿರೀಕ್ಷಿಸಬೇಡ . ಹಾಗಂತ ನೀನು ಬದಲಾಗಬೇಕಿಲ್ಲ. ನೀನು ಮನೆಯನ್ನು ಚೊಕ್ಕಟವಾಗಿರಿಸಿಕೊಳ್ಳುವ ನಿನ್ನ ಪ್ರಯತ್ನ ಮುಂದುವರೆಸು. ಯಾರ ಸಹಕಾರದ ನಿರೀಕ್ಷೆ ಮಾಡಬೇಡ. ಸಹಕಾರ ನಿರೀಕ್ಷಿಸಿದಾಗ ಅದು ದೊರೆಯದಿದ್ದರೆ ಮನಸು ಕೆಡುತ್ತೆ. ಹಾಗಂತ ಸಂಬಂಧ ಮುರಿಯಲು ಸಾಧ್ಯವೇ?. ತಾಳ್ಮೆ ಇರಲಿ . ಕ್ರಮೇಣ ಎಲ್ಲರೂ ಬದಲಾಗುತ್ತಾರೆ ಎಂದು ತಿಳುವಳಿಕೆ ಕೊಡುತ್ತಾರೆ. ಅಮ್ಮನ ಮಾತು ಕೆಲವೇ ದಿನಗಳಲ್ಲಿ ಸತ್ಯ ವಾಗುತ್ತೆ. ಅಲ್ಲಲ್ಲಿ ವಸ್ತುಗಳನ್ನು ಎಸೆಯುತ್ತಿದ್ದ , ಗಂಡ ಮತ್ತು ನಾದಿನಿ  ವಸ್ತುಗಳನ್ನು ಆಯಾ ಜಾಗದಲ್ಲಿ ಇಡಲಾರಂಭಿಸುತ್ತಾರೆ. ತಮಗೆ ಅರಿವು ಇಲ್ಲದೇನೆ ಎಲ್ಲರೂ ಬದಲಾಗುತ್ತಾರೆ. ಹಾಗಾಗಿ ಕೆಲವೊಮ್ಮೆ ನಾವು ನಿರೀಕ್ಷೆ ಇಲ್ಲವೇ ಪ್ರತಿಫಲದ ಅಪೇಕ್ಷೆ ಇಲ್ಲದೆ ನಮ್ಮ ಕೆಲಸ ಮಾಡಬೇಕಾಗುತ್ತದೆ. ಆದರೆ ನಮ್ಮ ಆ ಒಳ್ಳೆತನ  ಒಂದಲ್ಲ ಒಂದು ದಿನ ನಿಜಕ್ಕೂ ಒಳ್ಳೆ ಪ್ರತಿಫಲವನ್ನು ಹೊತ್ತು ತರುತ್ತದೆ.

 

ನಮ್ಮ ನೆಮ್ಮದಿಗಾಗಿ , ಸಂತೋಷಕ್ಕಾಗಿ ನಾವು ನಿರೀಕ್ಷೆಗಳನ್ನು ಅನೇಕ ಬಾರಿ ಬದುಕಿನಲ್ಲಿ ಮರೆಯಬೇಕಾದ ಸಂದರ್ಭಗಳು ಬರುತ್ತದೆ. ಕೆಲಸದಲ್ಲಿ ನೋಡಿ, ತುಂಬಾ ಕಷ್ಟ ಪಡುತೇವೆ. ರಾತ್ರಿ ಹಗಲು ದುಡಿಯುತೇವೆ.ನನ್ನ ಶ್ರಮವನ್ನು ಸಂಸ್ಥೆ ಗುರುತಿಸಿ ನನಗೆ ಬಡ್ತಿ ಕೊಡ್ಲಿ ಅಂತ ನೀರಿಕ್ಷಿಸುತ್ತೆವೆ.ಆದರೆ ಕೆಲವೊಮ್ಮೆ ನಮ್ಮ ನೀರಿಕ್ಷೆಗಳು ಸುಳ್ಳಾಗುತ್ತವೆ. ಆಗ ಆ ನಿರಾಶೆಯನ್ನು ನಮ್ಮಿಂದ ತಡೆಯಲು ಸಾಧ್ಯವಾಗುವುದಿಲ್ಲ . ಅದರ ಪರಿಣಾಮ ನಮ್ಮ ಕೆಲಸದ ಮೇಲು ಕಂಡು ಬರುತ್ತೆ. ಕೆಲಸ ಕಳೆದುಕೊಂಡ್ರು ಕೂಡ ಆಶರ್ಯವಿಲ್ಲ. ಅದೇ ಕೆಲಸವನ್ನು ನನ್ನ ಕರ್ತವ್ಯ ಅಂತ ನಂಬಿ , ನಮ್ಮ ಕೆಲಸವನ್ನು ನಾವು ಪ್ರೀತಿಸಿ ಶ್ರದ್ದೆಯಿಂದ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳದೆ ಮಾಡಿದ್ರೆ , ಗುರುತಿಸುವವರು ಖಂಡಿತವಾಗಲೂ ನಮ್ಮ ಕೆಲಸವನ್ನು ಗಮನಿಸುತ್ತಾರೆ. ನಾವು ಬಯಸದೆ , ನೀರಿಕ್ಷೆಯನ್ನು ಕೂಡ ಮಾಡದಿರುವ ಸಂದರ್ಭದಲ್ಲಿ ನಮಗೆ ಮುಂಬಡ್ತಿ ದೊರಕುತ್ತದೆ.

ಹೀಗೆ ಎಷ್ಟೋ ಉದಾಹರಣೆಗಳನ್ನು ನಾವು ಕೊಡಬಹುದು. ಕೊನೆಯದಾಗಿ ನೀರಿಕ್ಷೆ ತಪ್ಪಲ್ಲ. ಆದರೆ ಸಂದರ್ಭಗಳು ನಮ್ಮ ಕುತ್ತಿಗೆಗೆ ಬಂದಾಗ , ನಮ್ಮ ನೀರಿಕ್ಷೆಗಳು ವ್ಯತಿರಿಕ್ತ ಪರಿಣಾಮ ಉಂಟುಮಾಡುವ ಸಂದರ್ಭ ಬಂದಾಗ ನಾವು ಅನಿವಾರ್ಯವಾಗಿ ನಮ್ಮ ನೀರಿಕ್ಷೆಗಳನ್ನು ಮರೆಯಬೇಕಾಗುತ್ತದೆ.

 

ಪ್ರಕಾಶ್ /ಮಲೆಬೆಟ್ಟು

0 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

Please Login or Create a free account to comment.